ಸುಬ್ಬಣ್ಣ ಅಯ್ಯಪ್ಪನ್ (ಜನನ ೧೦ ಡಿಸೆಂಬರ್ ೧೯೫೫) ಅವರು ಭಾರತಿಯ ಜಲಕೃಷಿ ವಿಜ್ಞಾನಿ, ಹಾಗು ಕರ್ನಾಟಕ ರಾಜ್ಯದವರು. ಅವರು ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಸುಬ್ಬಣ್ಣನವರು ಜನವರಿ ೨೦೧೦ - ಫೆಬ್ರುವರಿ ೨೦೧೬ ರ ಅವಧಿಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (), ನಲ್ಲಿ ನಿರ್ದೇಶಕ-ಜನರಲ್ ಅಗಿದ್ದರು. ಹಾಗು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯಲ್ಲಿ() ಸರ್ಕಾರದ ಕಾರ್ಯದರ್ಶಿಯಗಿದ್ದರು. ಮಣೀಪುರದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದರು. ಭಾರತದಲ್ಲಿ ನೀಲಿ ಕ್ರಾಂತಿಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಇಸ್ರೋ ಮುಖ್ಯಸ್ಥರಾದ ಮೊದಲ ಬೆಳೆ-ಅಲ್ಲದ ವಿಜ್ಞಾನಿ. ಡಾ ಎಸ್ ಅಯ್ಯಪ್ಪನ್ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಮತ್ತು ಮಂಗಳೂರಿನ ಮೀನುಗಾರಿಕೆ ಕಾಲೇಜಿನಿ೦ದ ಮೀನು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಮೀನುಗಾರಿಕೆ, ಲಿಮ್ನಾಲಜಿ ಮತ್ತು ಜಲಜೀವಿ ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಡಾ ಎಸ್ ಅಯ್ಯಪ್ಪನ್ ಅವರು ೧೯೭೮ ರಲ್ಲಿ ಬ್ಯಾರಕ್‌ಪುರದ, ಸೆಂಟ್ರಲ್ ಇನ್‌ಲ್ಯಾಂಡ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜ್ಞಾನಿಯಾಗಿ ಐಸಿಎಆರ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೯೬ ರ೦ದು ಅವರು ಭುವನೇಶ್ವರದ ,CIFAನಲ್ಲಿ ನಿರ್ದೇಶಕರಾಗಿ ನೇಮಕಗೊಂಡರು. , ಮುಂಬೈ (ಡೀಮ್ಡ್ ವಿಶ್ವವಿದ್ಯಾಲಯ)ನಲ್ಲಿ ನಿರ್ದೆಶಕರ ಕಚೇರಿಯನ್ನು ಹೊಂದುವ ಮೊದಲು ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು ೨೦೦೨ ರಲ್ಲಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ (ಮೀನುಗಾರಿಕೆ) ಪ್ರಧಾನ ಕಛೇರಿಗೆ ಬಂದರು. ಜನವರಿ ೧, ೨೦೧೦ ರಂದು ಕಾರ್ಯದರ್ಶಿಯಾಗಿದ್ದರು, ಮತ್ತು ಡೈರೆಕ್ಟರ್ ಜನರಲ್ ಆಗಿ, ನ ಪ್ರಮುಖ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಆ ಹುದ್ದೆಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ, &, ಹೈದರಾಬಾದ್ (೨೦೦೬-೨೦೦೮) ಸ್ಥಾಪಕ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು. == ಮನ್ನಣೆ: ಪದ್ಮಶ್ರೀ == ೨೦೦೨ ರಲ್ಲಿ, ಭಾರತ ಸರ್ಕಾರವು ಪದ್ಮ ಸರಣಿಯ ಪ್ರಶಸ್ತಿಗಳಲ್ಲಿ ಮೂರನೆ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರ ವಿಶಿಷ್ಟ ಸೇವೆಗಾಗಿ ನೀಡಿತು. "ಗೌರವಾನ್ವಿತ ಜಲಕೃಷಿ ವಿಜ್ಞಾನಿ - ಭಾರತದ ನೀಲಿ ಕ್ರಾಂತಿಗೆ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ" ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. == ಇತರ ಮನ್ನಣೆಗಳು ಮತ್ತು ಪ್ರಶಸ್ತಿಗಳು == ಸುಬ್ಬಣ್ಣ ಅಯ್ಯಪ್ಪನ್ ಅವರು ಜಲಚರ ಸಾಕಣೆ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಹಲವಾರು ಮನ್ನಣೆಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವುಗಳು ಸೇರಿವೆ: ಸೊಸೈಟಿ ಆಫ್ ಬಯೋಸೈನ್ಸ್ ಇನ್ ಇಂಡಿಯಾ (೧೯೯-೧೯೯೭) ನೀಡಿದ ಜಹೂರ್ ಖಾಸಿಮ್ ಚಿನ್ನದ ಪದಕ ವಿಶೇಷ ಪ್ರಶಸ್ತಿ (೧೯೯೭) ಮೀನುಗಾರಿಕೆಯಲ್ಲಿ ಗಮನಾರ್ಹ ಕೊಡುಗೆಗಳಿಗಾಗಿ ತಂಡದ ನಾಯಕರಾಗಿ ತಂಡದ ಸಂಶೋಧನೆಗಾಗಿ ಪ್ರಶಸ್ತಿ (೧೯೯೭-೧೯೯೮) ಡಾ. ವಿಜಿ ಜಿಂಗ್ರಾನ್ ಚಿನ್ನದ ಪದಕ (೨೦೦೨) ಪ್ರೊ. ಮೀನುಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶ್ರೇಷ್ಠತೆಗಾಗಿ ಶೆಟ್ಟಿ ಪ್ರಶಸ್ತಿ, ಏಷ್ಯನ್ ಫಿಶರೀಸ್ ಸೊಸೈಟಿ, ಭಾರತೀಯ ಶಾಖೆ (೨೦೦೨) == ಉಲ್ಲೇಖಗಳು ==